ಯಕ್ಷಾಂಗಣದಲ್ಲಿ ನೃತ್ಯ ನಾಟಕಗಳ ಭರಪೂರ ಸೊಬಗು
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 23 , 2014
|
ಜನವರಿ 23, 2014
|
ಯಕ್ಷಾಂಗಣದಲ್ಲಿ ನೃತ್ಯ ನಾಟಕಗಳ ಭರಪೂರ ಸೊಬಗು
ಹೊನ್ನಾವರ:
ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇ ದಿನವೂ ಕಲಾಸಕ್ತರಿಗೆ ಗಾಯನ, ನತ್ಯ ನಾಟಕಗಳ ಸೊಬಗು ಉಣ ಬಡಿಸಿತು. ದಿನಕ್ಕಿಂತ ಹೆಚ್ಚು ಸಂಖ್ಯೆಯಲ್ಲಿಮ ಕಿಕ್ಕರಿದು ಪ್ರೇಕ್ಷಕರು ಸೇರಿದ್ದರು.
ಬೆಳಿಗ್ಗೆ 10 ಗಂಟೆಗೆ ರವಿ ಅಲೆವೊರಾಯ ವರ್ಕಾಡಿಯವರಿಂದ ನಡೆದ ಸ್ತ್ರೀ ಪಾತ್ರ ಕೇಂದ್ರೀಕತ ಏಕವ್ಯಕ್ತಿ ಯಕ್ಷಗಾನ ಯಕ್ಷಗಾನ ಕಲಾ ಪ್ರೇಮಿಗಳ ಮನ ಸೂರೆಗೊಂಡಿತು. ಬೆಳಿಗ್ಗೆ ಮಿತ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಅಧ್ಯಯನ ಮುಖಿಯಾಗಿರುವ ಇಂಥ ಕಾರ್ಯಕ್ರಮಗಳನ್ನು ಸಂಘಟಿಸಿರುವ ಕರೆಮನೆ ಶಿವಾನಂದ ಹೆಗಡೆಯವರ ಪ್ರಯತ್ನವನ್ನು ಪ್ರಶಂಸಿಸಿದರು. ಸಂಜೆ ಎಂದಿನಂತೆ ಮೊದಲು ಸಭಾ ಕಾರ್ಯಕ್ರಮ, ಸನ್ಮಾನ ನಡೆದವು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು. ಅಷ್ಟುಹೊತ್ತಿಗಾಗಲೇ ಸಂಭಾಂಗಣ ಪ್ರೇಕ್ಷಕರಿಂದ ತುಂಬಿಹೋಯಿತು. ಮೊದಲು ಖ್ಯಾತ ಹಿಂದೂಸ್ಥಾನಿ ಗಾಯಕ ಪಂ. ಶ್ರೀಪಾದ ಹೆಗಡೆ ಕಂಪ್ಲಿಯವರು ಹಿಂದೂ ಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ ಸುಧೆ ಹರಿಸಿದರು. ಅವರಿಗೆ ನಾಗವೇಣಿ ಶ್ರೀಪಾದ ಹೆಗಡೆ ಕಂಪ್ಲಿ ಹಾರ್ಮೋನಿಯಂ ಸಾಥ್, ಬೆಂಗಳೂರಿನ ಗುರುಮೂರ್ತಿ ವೆದ್ಯ ತಬಲಾ ಸಾಥ್ ಉತ್ತಮವಾಗಿ ನೀಡಿದರು. ನಂತರ ಸಾಗರದ ನಾಟ್ಯ ತರಂಗ ಟ್ರಸ್ಟ್ ತಂಡದಿಂದ ನತ್ಯ ರೂಪಕ. ಮುಕ್ಕಾಲು ಗಂಟೆಗಿಂತಲೂ ಹೆಚ್ಚು ಕಾಲ ನಡೆದ ನತ್ಯ ರೂಪಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿತು.
ನಂತರದ ಸರದಿ ಹೆದರಾಬಾದಿನ ವೆಂಕಟೇಶ್ವರ ನಾಟ್ಯ ಮಂಡಳಿ ಸುರಭಿ ತಂಡದವರಿಂದ ಪಾತಾಳ ಬೆರವಿ ನಾಟಕ ಪ್ರದರ್ಶನ. ಅಲ್ಲಿಯ ಭಾಷೆ ಇಲ್ಲಯವರಿಗೆ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ಆದರೆ ಭಾಷಾ ಭಿನ್ನತೆ ಮೀರಿ ನಾಟಕ ಜನಮನ ಸೂರೆಗೊಂಡಿತು. ಅಭಿನಯ, ನಾಟಕದ ಪರಿಕರಗಳ ಜೋಡಣೆ, ವೇಷಭೂಷಣ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಕೃಪೆ :
http://www.vijaykarnataka.com
|
|
|